ನಿರ್ದಿಗಂತ ರಂಗೋತ್ಸವದ ಶೀರ್ಷಿಕೆ ಇದು. ‘ನೇಹ’ ಪದವು ಸಂವಿಧಾನದ ಪೀಠಿಕೆಯಲ್ಲಿಯ ಮೈತ್ರಿ ಪದದಿಂದ ಪ್ರೇರಿತವಾಗಿದ್ದರೆ, ‘ನೇಯ್ಗ್ಗೆ’ ಪದವು ರಂಗಕಾರ್ಯಗಳ ಕಟ್ಟುವಿಕೆ, ಭಿನ್ನ ಕಾಲ ದೇಶಗಳ ಸಹೋದರತೆಯ ಹೆಣೆಯುವಿಕೆ ಮುಂತಾದ ಅರ್ಥಗಳನ್ನು ಹೊಂದಿದೆ. ನಾಟಕವೆಂದರೆ ಹಲವು ಸೌಂದರ್ಯ ವಿಜ್ಞಾನಗಳ ನೆಯ್ಗೆಯೂ ಆಗಿದೆ.
ಈ ರಂಗೋತ್ಸವದಲ್ಲಿ ಸ್ಥಳೀಯ ಜನಪದ ಮಹಾಕಾವ್ಯದ ನಾಯಕ ಮಂಟೇಸ್ವಾಮಿ, ಫುಟ್ಬಾಲ್ ಆಟಗಾರ ಓಝಿಲ್, ಹಾಡುಗಾರ ಬಾಬ್ಮಾರ್ಲೆ, ಬರಹಗಾರ ಕಾಮು ಮುಂತಾದ ಹಲವರ ಕಥನಗಳು ನಾಟಕವಾಗಿ ಮೈದಾಳಿದೆ. ಜನಪದ ಹಾಡುಗಳ ಜತೆ ಪ್ರತಿಭಟನೆಯ ಹಾಡುಗಳೂ ಸೇರಿಕೊಂಡಿದೆ. ಪ್ರೊಸೀನಿಯಂ ನಾಟಕಗಳ ಜತೆ ಬೀದಿನಾಟಕಗಳೂ, ಸಂಗೀತ ಪ್ರಯೋಗಗಳೂ, ಪಪೆಟ್ಗಳೂ ಒಟ್ಟಂದದಲ್ಲಿ ಎಲ್ಲವೂ ಕೂಡಿಕೊಂಡು ಪ್ರಯೋಗಗೊಂಡಿದೆ. ಹೀಗೆ ಹಲವು ಮನಸುಗಳ, ನಾಡುಗಳ, ಕನಸುಗಳ, ಪ್ರಕಾರಗಳ ನೆಯ್ಗೆಯಿದು. ಒಟ್ಟೂ ಸೇರುವುದರಲ್ಲಿಯೇ ಈ ಛಂದವಿದೆ.
ಉದ್ಘಾಟನೆ – ನಾನಾ ಪಾಟೇಕರ್ | ಕಿಶೋರ್
ಹಾಡುಗಳ ಪ್ರಸ್ತುತಿ
ರಂಗ ಪ್ರಸ್ತುತಿಗಳು
ಸಂಗೀತ ಕಾರ್ಯಕ್ರಮಗಳು
ರಂಗ ಸಂವಾದಗಳು
ವಿಚಾರ ಸಂಕಿರಣ
ರಂಗಭೂಮಿಯ ವರ್ತಮಾನ : ಮಾತುಕತೆ
ಸಿನೆಮಾ ಪ್ರದರ್ಶನ ಮತ್ತು ಸಂವಾದ
ಬಹುವಾದ್ಯಗಳ ನುಡಿ ನಡಿಗೆ
ಸ್ಥಳೀಯ ತಂಡಗಳ ರಂಗ ಪ್ರಸ್ತುತಿಗಳು